ಬದುಕು ಒಂದು ರುದ್ರವೀಣೆ

ಬದುಕು ಒಂದು ರುದ್ರವೀಣೆ
ನಡೆಸುವವನು ನುಡಿಸು ನೀನು
ಬೆರಸಿ ನಿನ್ನ ತನು ಮನವನು||
ಕಲಿಸಿ ಎಲ್ಲಾನಡೆಸುತಿರಲವನು
ಭಯವದೇಕೆ ಬದುಕುವುದಕೆ?||

ನಾಳೆಯ ಚಿಂತೆಯ ಬಿಟ್ಟುನೀನು
ಮುಗಿಸು ಇಂದಿನ ಕಾರ್ಯದಲ್ಲಿ ಮಗ್ನನಾಗಿ|
ನಾಳೆಕೊಡುವನು; ಉಳಿದೆಲ್ಲವ ಕೊಟ್ಟೇಕೊಡುವನು|
ನಾಳೆಗಾಗಿ ಕೊರಗಿ ನೀನು ಕೆಡಲುಬೇಡ
ಇಂದಿನ ಸುಂದರ ಅಮೃತಘಳಿಗೆಯನು||

ಆಗಿಹೋದ ಮಿಂಚಿಮಾಸಿದ
ಕಹಿಯನೆನೆದು ಕೊರಗಲು ಫಲವದಿಲ್ಲ|
ಹಳೆಯದನುಭವದಿ ಹೊಸಾ ಚಿಗುರಬೆಳಸಿ
ತಳಿರುಕಾಂತಿಯ ತುಂಬು ನೀನು|
ಫಲಾಫಲವ ಬಯಸದಲೇ
ಪಾಪಕರ್ಮವೆಸಗದೆ ಬಾಳಸಾಗಿಸು ನೀನು
ತಂದ ಕರ್ಮತೀರಿಸುತಲಿ
ಮುಂದೆ ಮುಂದೆ ಸಾಗು ನೀನು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾವಲಗಾರ ಕಂಭ
Next post ಭಕ್ತಿ ತರಂಗಗಳು

ಸಣ್ಣ ಕತೆ

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

cheap jordans|wholesale air max|wholesale jordans|wholesale jewelry|wholesale jerseys